Gruhalakshmi Yojnae Stop: ರಾಜ್ಯದ ಈ ಮಹಿಳೆಯರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಬಂದ! ನಿಮ್ಮ ಹೆಸರು ಇದೆಯೇ? ಈಗಲೇ ಚೆಕ್ ಮಾಡಿಕೊಳ್ಳಿ?
ಈಗ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಕಾಂಗ್ರೆಸ್ ಸರಕಾರವು ನೀಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗ ಅತ್ಯಂತ ಪ್ರಚಲಿತದಲ್ಲಿ ಇರುವಂತಹ ಯೋಜನೆಯೆಂದರೆ ಅದು ಗೃಹಲಕ್ಷ್ಮಿ ಯೋಜನೆ. ಅಷ್ಟೇ ಅಲ್ಲದೆ ಈಗ ಕಳೆದ ಎರಡು ಮೂರು ತಿಂಗಳಿನಿಂದ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಈಗ ಯಾವ ಮಹಿಳೆಯರ ಖಾತೆಗಳಿಗೂ ಕೂಡ ಜಮಾ ಆಗಿಲ್ಲ. ಅಂತಹ ಮಹಿಳೆಯರಿಗೆ ಈಗ ಮತ್ತಷ್ಟು ಸರ್ಕಾರವು ಶಾಕಿಂಗ್ ನ್ಯೂಸ್ ಅನ್ನು ನೀಡಿದೆ. ಆ ಒಂದು ಶಾಕಿಂಗ್ ನ್ಯೂಸ್ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.
ಅದೇ ರೀತಿಯಾಗಿ ಸ್ನೇಹಿತರೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವಾಗಲಿ ಅಥವಾ ಸರ್ಕಾರವು ನೀಡುವ ಪ್ರತಿಯೊಂದು ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಲು ನಮಗೆ ಮುಖ್ಯವಾಗಿ ರೇಷನ್ ಕಾರ್ಡ್ ಬೇಕಾಗಿರುತ್ತದೆ. ಆದರೆ ಕೆಲವೊಂದು ಜನರ ರೇಷನ್ ಕಾರ್ಡ್ ಮೇಲೆ ತಪ್ಪು ದಾಖಲೆಗಳನ್ನು ನೀಡುವುದು ಹಾಗೂ ಅವುಗಳ EKYC ಆಗದಿರುವುದು ಮತ್ತು ಬ್ಯಾಂಕ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು. ಇನ್ನು ಹಲವಾರು ರೀತಿಯ ಸಮಸ್ಯೆಗಳನ್ನು ನಾವು ಈಗಾಗಲೇ ಕಂಡಿದ್ದೇವೆ. ಆದರೆ ಇವುಗಳ ಬಗ್ಗೆ ಈಗ ಸರ್ಕಾರ ಮತ್ತಷ್ಟು ಹೊಸ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಅದು ಏನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಗೃಹಲಕ್ಷ್ಮಿ ಯೋಜನೆಯ ಮಾಹಿತಿ
ಈಗ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಕಾಂಗ್ರೆಸ್ ಸರ್ಕಾರ ನೀಡಿರುವ ಈ ಐದು ಯೋಜನೆಗಳಿಗೆ ಸರ್ಕಾರ ವಾರ್ಷಿಕವಾಗಿ 56,000 ಕೋಟಿಗಳನ್ನು ಈ ಒಂದು ಯೋಜನೆಗಳಿಗೆ ಮೀಸಲಿಟ್ಟಿದೆ. ಈಗ ನಮ್ಮ ರಾಜ್ಯದ ಒಟ್ಟು ಬಜೆಟಿನಲ್ಲಿ ಹೆಚ್ಚಿಗೆ ಪಾಲು ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರಿಂದ ಈಗ ಬೇರೆ ಯೋಜನೆಗಳಿಗೆ ನಿಗದಿತ ಅನುದಾನದ ಕೊರತೆ ಹಾಗೂ ಕಾಮಗಾರಿಗಳ ಅಭಿವೃದ್ಧಿ ಕೂಡ ವಿಳಂಬವಾಗುತ್ತಿದ್ದು. ಅಷ್ಟೇ ಅಲ್ಲದೆ ಇಲಾಖೆಯ ಮಟ್ಟದಲ್ಲಿ ಕಾರ್ಯಾಚರಣೆಯಲ್ಲಿ ಹಣದ ಅಭಾವ ಆದಂತಹ ಸಮಸ್ಯೆಗಳು ಈಗ ಉಂಟಾಗುತ್ತಿವೆ ಎಂಬ ಮಾಹಿತಿಯು ದೊರೆತಿದೆ.
ಇನ್ನು ಮುಂದೆ ಅನರ್ಹರಿಗೆ ಇಲ್ಲ ಈ ಒಂದು ಯೋಜನೆಯ ಲಾಭ
ಈಗ ಸ್ನೇಹಿತರೆ ಈ ಒಂದು ಸಿಎಂ ಅವರ ಆರ್ಥಿಕ ಸಲಹೆಗಾರರಾದಂತ ಬಸವರಾಜ ರಾಯರೆಡ್ಡಿ ಅವರು ಈಗ ನೀಡಿದಂತಹ ಬಹಿರಂಗ ಹೇಳಿಕೆ ಮಾಹಿತಿ ಪ್ರಕಾರ ಅನರ್ಹ ಫಲಾನುಭವಿಗಳಿಗೆ ಗ್ಯಾರಂಟಿ ನೀಡುವುದು ಸರಿಯಲ್ಲ ಎಂದು ಮಾಹಿತಿ ನೀಡಿದ್ದಾರೆ. ಆದಕಾರಣ ಸರ್ಕಾರವು ಈಗ ಗ್ಯಾರಂಟಿ ಯೋಜನೆಗಳಲ್ಲಿ ಅರ್ಹತೆಗಳ ಪರಿಶೀಲನೆಗೆ ಹೊಸ ಮೌಲ್ಯಮಾಪನ ಕ್ರಮವನ್ನು ಜಾರಿಗೆ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : Guarantee Schemes Update: ಇಂಥವರಿಗೆ ಇನ್ನು ಮುಂದೆ ಗ್ಯಾರಂಟಿ ಯೋಜನೆ ಬಂದ! ಇಲ್ಲಿದೆ ನೋಡಿ ಮಾಹಿತಿ.
ಈಗ ಯಾರೆಲ್ಲಾ ಹೈ ರೆಂಟ್ ಮನೆಗಳಲ್ಲಿ ವಾಸವನ್ನು ಮಾಡುತ್ತಿದ್ದಾರೋ ಅಂತವರು ಗೃಹ ಜ್ಯೋತಿ ಲಾಭ ಪಡೆದುಕೊಳ್ಳುತ್ತಿದ್ದಾರೆ. ಹಾಗೆ ಈಗ GST ಅನ್ನು ಪಾವತಿ ಮಾಡುತ್ತಿರುವವರು ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಪಡಿತರ ಚೀಟಿಯ ದುರ್ಬಳಕೆಯನ್ನು ಮಾಡುತ್ತಿದ್ದಾರೆ. ಈ ಒಂದು ಅಂಶಗಳ ಬಗ್ಗೆ ಎಲ್ಲಾ ತನಿಖೆ ಮಾಡಿ. ಇವುಗಳನ್ನು ಸ್ಥಗಿತ ಮಾಡಲು ಸರಕಾರ ತೀರ್ಮಾನವನ್ನು ತೆಗೆದುಕೊಂಡಿದೆ.
ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ
ಈಗಾಗಲೇ ಸ್ನೇಹಿತರೆ ಈ ಒಂದು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಈ ಹಿಂದೆ 150 ರೂಪಾಯಿ ನಗುದು ಹಣವನ್ನು ನೀವು ಪಡೆದುಕೊಳ್ಳುತ್ತಿದ್ದರು. ಇದರ ಬದಲಾಗಿ ಈಗ ಧಾನ್ಯಗಳನ್ನು ಕಿಟ್ ವಿತರಣೆ ಮಾಡಲು ಸರ್ಕಾರ ಆಲೋಚನೆ ಮಾಡುತ್ತಿದೆ ಎಂದು ಮಾಹಿತಿ ದೊರೆತಿದೆ. ಅಷ್ಟೇ ಅಲ್ಲದೆ ಇದರಿಂದ ನಗದುದುರ್ಬಳಕೆಗೆ ಕಡಿಮೆ ಮಾಡಿ ಆಹಾರ ಸುರಕ್ಷತೆ ಹಾಗೂ ನೈಸರ್ಗಿಕ ಉತ್ಪನ್ನಗಳಿಗೆ ಪ್ರೋತ್ಸಾಹವನ್ನು ನೀಡಲು ಮುಂದಾಗಿದೆ.
ಅಷ್ಟೇ ಅಲ್ಲದೆ ಈಗ ನೀವೇನಾದ್ರೂ ಒಂದು ವೇಳೆ ಜಿಎಸ್ಟಿ ಪಾವತಿ ಹಾಗೂ ಸುಳ್ಳು ದಾಖಲೆಗಳನ್ನು ನೀಡಿ. ಈ ಒಂದು ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳುತ್ತಿದ್ದರೆ ನಿಮ್ಮಗೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ಒಂದು ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಲು ಸಾಧ್ಯವಿರುವುದಿಲ್ಲ. ಆದ ಕಾರಣ ಈಗ ನೀವು ಕೂಡಲೇ ಇವುಗಳನ್ನು ಪರಿಶೀಲನೆ ಮಾಡಿಕೊಂಡು ಈಗ ನೀವು ಕೂಡ ನಿಮ್ಮ ಖಾತೆಗಳಿಗೆ ಈ ಒಂದು ಯೋಜನೆಗಳು ಹಣಗಳು ಬಂದು ತಲುಪುತ್ತದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ.