Jeevajala Scheme:- ವೀರಶೈವ-ಲಿಂಗಾಯತ ರೈತರಿಗೆ ₹4 ಲಕ್ಷದವರೆಗೆ ಉಚಿತ ಬೋರ್ವೆಲ್ ಸಬ್ಸಿಡಿ!
ಜೀವಜಲ ಯೋಜನೆ 2025–26: ವೀರಶೈವ-ಲಿಂಗಾಯತ ರೈತರಿಗೆ ₹4 ಲಕ್ಷದವರೆಗೆ ಉಚಿತ ಬೋರ್ವೆಲ್ ಸಬ್ಸಿಡಿ! ಕರ್ನಾಟಕ ಸರ್ಕಾರದ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವು 2025-26ನೇ ಸಾಲಿಗೆ ರೈತರಿಗೆ ಬೋರ್ವೆಲ್ ಕೊರೆಯಲು ಆರ್ಥಿಕ ಸಹಾಯ ನೀಡುವ ಜೀವಜಲ ಯೋಜನೆ ಘೋಷಿಸಿದೆ. ಈ ಯೋಜನೆಯಡಿ ವೀರಶೈವ-ಲಿಂಗಾಯತ (3B ವರ್ಗ) ಸಮುದಾಯದ ಸಣ್ಣ ರೈತರಿಗೆ ಉಚಿತ ಬೋರ್ವೆಲ್ ಕೊರೆಯಲು ₹4,75,000 ವರೆಗೆ ನೆರವು ಒದಗಿಸಲಾಗುತ್ತದೆ.
ಇದೊಂದು ರೈತಮುಖಿ ಯೋಜನೆಯಾಗಿದ್ದು, ನೀರಾವರಿ ಲಭ್ಯತೆಯ ಕೊರತೆಯಿಂದ ಬಳಲುತ್ತಿರುವ ರೈತರ ಪರಿಷ್ಠಿತಿಯನ್ನು ಸುಧಾರಿಸಲು ಮುಖ್ಯ ಉದ್ದೇಶ ಹೊಂದಿದೆ. ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: ಜೂನ್ 30, 2025.
ಸಬ್ಸಿಡಿ ವಿವರ
ಜಿಲ್ಲೆಗಳು | ಒಟ್ಟು ವೆಚ್ಚ (₹) | ಬೋರ್ವೆಲ್ + ಪಂಪ್ ಸೆಟ್ (₹) | ವಿದ್ಯುತ್ ಸಂಪರ್ಕ (₹) | ಶೇ.4 ಬಡ್ಡಿದರ ಸಾಲ (₹) |
ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು | ₹4,75,000 | ₹3,50,000 | ₹75,000 | ₹50,000 |
ಇತರೆ 25 ಜಿಲ್ಲೆಗಳು | ₹3,75,000 | ₹2,50,000 | ₹75,000 | ₹50,000 |
ಅರ್ಹತೇ ಏನು?
- ವೀರಶೈವ-ಲಿಂಗಾಯತ (3B ವರ್ಗ) ಸಮುದಾಯದ ಸದಸ್ಯರಾಗಿರಬೇಕು.
- ಗ್ರಾಮೀಣ ಪ್ರದೇಶ: ವಾರ್ಷಿಕ ಆದಾಯ ₹98,000 ಒಳಗಿರಬೇಕು.
- ಪಟ್ಟಣ ಪ್ರದೇಶ: ವಾರ್ಷಿಕ ಆದಾಯ ₹1,20,000 ಒಳಗಿರಬೇಕು.
- 18ರಿಂದ 60 ವರ್ಷದೊಳಗಿನ ರೈತರು ಅರ್ಹರು.
- ಕನಿಷ್ಠ ಜಮೀನು ಹೊಂದಿರುವುದು ಕಡ್ಡಾಯ:
- ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ: ಕನಿಷ್ಟ 1 ಎಕರೆ
- ಇತರೆ ಜಿಲ್ಲೆಗಳು: ಕನಿಷ್ಠ 2 ಎಕರೆ – ಗರಿಷ್ಠ 5 ಎಕರೆ
- ಫ್ರೂಟ್ಸ್ (FRUITS ID) ಹೊಂದಿರಬೇಕು.
- ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸೌಲಭ್ಯ ಲಭ್ಯ.
ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ದಾಖಲೆಗಳು
- ಪಾಸ್ಪೋರ್ಟ್ ಗಾತ್ರದ ಫೋಟೋ
- ಜಾತಿ ಮತ್ತು ಆದಾಯ ಪ್ರಮಾಣಪತ್ರ (ಫಾರ್ಮ್-ಎಫ್)
- ಸಣ್ಣ/ಅತಿ ಸಣ್ಣ ರೈತ ಪ್ರಮಾಣಪತ್ರ
- ಜಮೀನಿನ ಹಕ್ಕುಪತ್ರಗಳು (ಪಹಣಿ, ಮ್ಯೂಟೇಷನ್, ತೆರಿಗೆ ರಶೀದಿ)
- ಫ್ರೂಟ್ಸ್ ಐಡಿ ಪ್ರಮಾಣಪತ್ರ
- ಪಡಿತರ ಚೀಟಿ
- ಶಾಶ್ವತ ನಿವಾಸ ಪ್ರಮಾಣಪತ್ರ
- ವಂಶವೃಕ್ಷ (ನೋಟರೈಸ್ಡ್)
- ಆಧಾರ್ ಕಾರ್ಡ್
ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಅಭ್ಯರ್ಥಿಗಳು ಕೆಳಗಿನ ವಿಧಾನದಲ್ಲಿ ಅರ್ಜಿ ಸಲ್ಲಿಸಬಹುದು
ಆನ್ಲೈನ್ ಮೂಲಕ
- ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ.
- ಹೊಸ ಬಳಕೆದಾರರಾಗಿ ನೋಂದಣಿ ಮಾಡಿ.
- OTP ಮೂಲಕ ಲಾಗಿನ್ ಮಾಡಿ.
- “ಜೀವಜಲ ಯೋಜನೆ” ಅರ್ಜಿ ಫಾರ್ಮ್ ಆಯ್ಕೆ ಮಾಡಿ.
- ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಕೊನೆಗೆ Submit ಮಾಡಿ.
ಆಫ್ಲೈನ್ / ಸಹಾಯ ಕೇಂದ್ರ
- ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ / ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ.
ಯೋಜನೆ ವಿವರಗಳು ಮತ್ತು ಅಪ್ಡೇಟ್ಗಾಗಿ ಅಧಿಕೃತ ವೆಬ್ಸೈಟ್ ಭೇಟಿ ನೀಡಿ:
https://kvldcl.karnataka.gov.in/events/kn
ಜೀವಜಲ ಯೋಜನೆ ವೀರಶೈವ-ಲಿಂಗಾಯತ ಸಮುದಾಯದ ಸಣ್ಣ ರೈತರಿಗೆ ಅತ್ಯುತ್ತಮ ಅವಕಾಶ. ನೀರಾವರಿ ಸೌಲಭ್ಯವನ್ನು ವಿಸ್ತರಿಸಲು ಈ ಯೋಜನೆಯಿಂದ ಬೋರ್ವೆಲ್ ಸಬ್ಸಿಡಿ ಪಡೆದು ನಿಮ್ಮ ಕೃಷಿಯ ಬೆಳೆಣೆಗೆ ಪುಷ್ಠಿ ನೀಡಿಕೊಳ್ಳಿ. ಅರ್ಜಿ ಸಲ್ಲಿಕೆಗೆ ತಡವಾಗದೇ ಈಗಲೇ ನಿಮ್ಮ ದಾಖಲೆಗಳನ್ನು ಸಿದ್ಧಪಡಿಸಿ ಅರ್ಜಿ ಸಲ್ಲಿಸಿ!