Gruha Lakshmi Amount:  ಹಣ ಲಭ್ಯವಾಗದವರಿಗೆ ಸಚಿವೆಯಿಂದ ಭರವಸೆ – ಹೊಸ ಅಪ್‌ಡೇಟ್

Gruha Lakshmi Amount:  ಹಣ ಲಭ್ಯವಾಗದವರಿಗೆ ಸಚಿವೆಯಿಂದ ಭರವಸೆ – ಹೊಸ ಅಪ್‌ಡೇಟ್

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಹಣ ಇನ್ನೂ ಬಂದಿಲ್ಲವೆಂದು ಹಲವಾರು ಫಲಾನುಭವಿಗಳು ದೂರು ನೀಡುತ್ತಿರುವ ನಡುವೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಈ ಕುರಿತು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಕಾರ್ಮಿಕ ಕಾರ್ಡ್ ಹೊಂದಿರುವ ಮಹಿಳೆಯರಿಗೂ ಯೋಜನೆಯ ಸದುಪಯೋಗ ಸಿಗಬೇಕು ಎಂಬ ಸರ್ಕಾರದ ದೃಷ್ಟಿಕೋಣವನ್ನು ಅವರು ಸ್ಪಷ್ಟಪಡಿಸಿದ್ದಾರೆ.

WhatsApp Float Button

Gruha Lakshmi Amount

WhatsApp Float Button

ಹಣ ಬಾರದವರ ಬಗ್ಗೆ ಸ್ಪಷ್ಟನೆ

ಯೋಜನೆಗೆ ಅರ್ಜಿ ಹಾಕಿದ್ದರೂ ಕೆಲವರಿಗೆ ₹2000 ಸಹಾಯಧನ ಹಣ ತಲುಪದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಈ ಯೋಜನೆಯ ಅಡಿಯಲ್ಲಿ ಕಾರ್ಮಿಕ ಮಹಿಳೆಯರು ಕೂಡ. ಕೆಲವರಿಗೆ ಹಣ ಬಾರದಿರುವುದು ತಾಂತ್ರಿಕ ದೋಷ ಅಥವಾ ದಾಖಲೆ ತೊಂದರೆಯಿಂದ ಇರಬಹುದು” ಎಂದು ಹೇಳಿದ್ದಾರೆ.

WhatsApp Float Button

ಇದನ್ನು ಓದಿ : Fast food Training: ಗ್ರಾಮೀಣ ಯುವಕರಿಗೆ ಉಚಿತ ಫಾಸ್ಟ್ ಫುಡ್ ತರಬೇತಿ – ಅರ್ಜಿ ಆಹ್ವಾನ

WhatsApp Float Button

ಕಾರ್ಮಿಕ ಇಲಾಖೆಯ ಜೊತೆ ಮಾತುಕತೆ
 ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಚರ್ಚೆ ನಡೆಸಲಾಗುವುದು ಮತ್ತು ತಕ್ಷಣವೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಭರವಸೆ ಅವರು ನೀಡಿದ್ದಾರೆ. “ಯಾರಾದರೂ ಯೋಜನೆಯ ಲಾಭದಿಂದ ವಂಚಿತರಾದರೆ, ಅವರ ವಿಚಾರದಲ್ಲಿ ಸರಿಯಾದ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.

WhatsApp Float Button

ಪೌಷ್ಟಿಕ ಆಹಾರ, ಬಿಲ್ ಪಾವತಿ ಕುರಿತು ಸ್ಪಷ್ಟನೆ

ಹಾಲಿನ ಪುಡಿ, ಮೊಟ್ಟೆ ಬಿಲ್ ಹಾಗೂ ಅಂಗನವಾಡಿ ಕಟ್ಟಡಗಳ ಬಾಡಿಗೆ ಬಾಕಿಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, “ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದು ನಮ್ಮ ಸರ್ಕಾರದ ಮೊದಲ ಆದ್ಯತೆ. ತಿಂಗಳಿಗೆ ಸಂಬಳ ಮತ್ತು ಬಿಲ್‌ಗಳ ಪಾವತಿಯನ್ನು ನಿರಂತರವಾಗಿ ಮಾಡಲಾಗುತ್ತಿದೆ. ಕೆಲವೊಮ್ಮೆ ತಡವಾಗಬಹುದು, ಆದರೆ ಪಾವತಿಯಾಗುವುದು ಖಚಿತ” ಎಂದು ವಿವರಿಸಿದರು.

WhatsApp Float Button

ಇದನ್ನು ಓದಿ : Crop Survey Update: ಬೆಳೆ ಸಮೀಕ್ಷೆ ಮಾಡದೇ ಇದ್ದರೆ ಬೆಳೆ ವಿಮೆ ಸೇರಿ ಹಲವಾರು ಯೋಜನೆಗಳ ಪ್ರಯೋಜನ ತಪ್ಪುಡುತ್ತೆ!

WhatsApp Float Button

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಿಳಿಸಿದಂತೆ, ಗೃಹಲಕ್ಷ್ಮಿ ಯೋಜನೆಯಡಿ ಯಾವುದೇ ವರ್ಗದ ಮಹಿಳೆಯರು ಹಣದಿಂದ ವಂಚಿತರಾಗಬಾರದು ಎಂಬುದೇ ಸರ್ಕಾರದ ನಿಲುವು. ಈ ಯೋಜನೆ ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿಗಳಲ್ಲೊಂದು ಎಂಬುದು ಅವರು ಪುನರುಚಿಸಿಕೊಂಡರು. ಹೀಗಾಗಿ ಹಂತ ಹಂತವಾಗಿ ಎಲ್ಲಾ ತೊಂದರೆಗಳನ್ನು ಪರಿಹರಿಸಿ, ಫಲಾನುಭವಿಗಳಿಗೆ ಹಣ ತಲುಪಿಸಲು ಸರ್ಕಾರ ಬದ್ಧವಾಗಿದೆ.

WhatsApp Float Button

ಯಾರಿಗಾದರೂ ಗೃಹಲಕ್ಷ್ಮಿ ಯೋಜನೆಯ ಹಣ ತಲುಪದೆ ಇದ್ದರೆ, ಆತಂಕಪಡಬೇಕಿಲ್ಲ. ಸರ್ಕಾರವು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲಿದೆ. ಯೋಜನೆಯ ಉದ್ದೇಶವೆಂದರೆ ಪ್ರತಿಯೊಂದು ಅರ್ಹ ಮಹಿಳೆಯಿಗೂ ನಿಗದಿತ ಹಣ ತಲುಪಿಸುವುದು. ಹೆಚ್ಚಿನ ಮಾಹಿತಿಗಾಗಿ ಅಥವಾ ದೂರು ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಕಾರ್ಮಿಕ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!