Ganga Kalyana Scheme: ಬೋರ್‌ವೆಲ್‌ಗೆ ₹2.75 ಲಕ್ಷದ ಸಹಾಯಧನ – ಅರ್ಜಿ ಹೇಗೆ ಸಲ್ಲಿಸಬೇಕು?

Ganga Kalyana Scheme: ಬೋರ್‌ವೆಲ್‌ಗೆ ₹2.75 ಲಕ್ಷದ ಸಹಾಯಧನ – ಅರ್ಜಿ ಹೇಗೆ ಸಲ್ಲಿಸಬೇಕು?

ಕೃಷಿಯಲ್ಲಿ ನೀರಾವರಿ ಒಂದು ಪ್ರಮುಖ ಅಂಶ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಆರ್ಯ ವೈಶ್ಯ ಸಮುದಾಯ ಅಭಿವೃದ್ದಿ ನಿಗಮದ ಮೂಲಕ 2025-26ನೇ ಸಾಲಿಗೆ “ವಾಸವಿ ಗಂಗಾ ಕಲ್ಯಾಣ ಜಲಶಕ್ತಿ ಯೋಜನೆ” ಜಾರಿಗೆ ತರಲಾಗಿದ್ದು, eligible ರೈತರಿಗೆ ಬೋರ್‌ವೆಲ್ ಮತ್ತು ಪಂಪ್‌ಸೆಟ್ ಅಳವಡಿಸಲು ₹2.75 ಲಕ್ಷದವರೆಗೆ ಸಾಲ ಹಾಗೂ ಸಹಾಯಧನ ನೀಡಲಾಗುತ್ತಿದೆ.

WhatsApp Float Button

Ganga Kalyana Scheme

ಈ ಯೋಜನೆಯ ಉದ್ದೇಶ ಮಾತ್ರ ಕೃಷಿ ಬೆಳವಣಿಗೆ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶದ ಸಣ್ಣ ರೈತರಿಗೆ ಆರ್ಥಿಕ ಸಬಲೀಕರಣವನ್ನು ಒದಗಿಸುವುದು ಕೂಡ ಆಗಿದೆ.

 ಯೋಜನೆಯ ಮುಖ್ಯ ಅಂಶಗಳು

  • ಯೋಜನೆಯ ಹೆಸರು: ವಾಸವಿ ಗಂಗಾ ಕಲ್ಯಾಣ ಜಲಶಕ್ತಿ ಯೋಜನೆ 2025-26
  • ಯೋಜನೆ ಜಾರಿಗೆ ತಂದವರು: ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ
  • ಒದಗಿಸಲಾಗುವ ನೆರವು: ₹2.75 ಲಕ್ಷ ಸಹಾಯಧನ, ₹50,000 ಕಡಿಮೆ ಬಡ್ಡಿದರದ ಸಾಲ
  • ಬೋರ್‌ವೆಲ್, ಪಂಪ್‌ಸೆಟ್ ಮತ್ತು ವಿದ್ಯುತ್ ಸಂಪರ್ಕ ಉಚಿತ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ 2025

 ಯೋಜನೆಯ ಉದ್ದೇಶಗಳು

  • ನೀರಾವರಿ ಸೌಲಭ್ಯ ಕಲ್ಪಿಸಿ ಕೃಷಿಗೆ ಬಲ ನೀಡುವುದು
  • ಕೃಷಿ ಉತ್ಪಾದಕತೆ ಹೆಚ್ಚಿಸಿ ರೈತರ ಆದಾಯ ಹೆಚ್ಚಿಸುವುದು
  • ಸ್ವಯಂ ಉದ್ಯೋಗದ ಅವಕಾಶ ಒದಗಿಸುವ ಮೂಲಕ ಆತ್ಮನಿರ್ಭರತೆ ಬೆಳೆಸುವುದು
  • ಗ್ರಾಮೀಣ ಆರ್ಥಿಕತೆಯ ಸಬಲೀಕರಣ

 ಯಾರು ಅರ್ಜಿ ಹಾಕಬಹುದು?

  1. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು
  2. ಕನಿಷ್ಠ 2 ಎಕರೆ ಹಾಗೂ ಗರಿಷ್ಠ 15 ಎಕರೆ ಜಮೀನು ಹೊಂದಿರಬೇಕು
  3. ಗ್ರಾಮೀಣ ಪ್ರದೇಶದವರಿಗೆ ವಾರ್ಷಿಕ ಆದಾಯ ₹98,000 ಮೀರಿರಬಾರದು
  4. ನಗರ ಪ್ರದೇಶದವರಿಗೆ ₹1.20 ಲಕ್ಷ ಮೀರಿರಬಾರದು
  5. ವಯಸ್ಸು 21 ರಿಂದ 45 ವರ್ಷ ನಡುವೆ ಇರಬೇಕು
  6. ಯಾವುದೇ ವರ್ಗದ ರೈತರು ಅರ್ಜಿ ಹಾಕಬಹುದ
  7. ಸ್ವಯಂ ಉದ್ಯಮ ಪ್ರಾರಂಭಿಸುವ ಆಸಕ್ತಿ ಇರಬೇಕು
  8. ಸರ್ಕಾರಿ ಉದ್ಯೋಗದಲ್ಲಿರುವ ಕುಟುಂಬ ಸದಸ್ಯರು ಅರ್ಹರಲ್ಲ

 ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಜಮೀನಿನ ದಾಖಲೆಗಳು (RTC)
  • ಭತ್ತದ FRUITS ID
  • ಬ್ಯಾಂಕ್ ಪಾಸ್‌ಬುಕ್ ಪ್ರತಿಗೆ
  • ಪಾಸ್ಪೋರ್ಟ್ ಅಳತೆ ಫೋಟೋ
  • ಸಕ್ರಿಯ ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವ ವಿಧಾನ (ಆನ್‌ಲೈನ್)

1:
ಆಧಿಕೃತ ನಿಗಮದ ವೆಬ್‌ಸೈಟ್‌ಗೆ ಭೇಟಿ ನೀಡಿ (Apply Now ಲಿಂಕ್).
ಮುಖ್ಯ ಪುಟದಲ್ಲಿ “Apply Online” → “ವಾಸವಿ ಜಲಶಕ್ತಿ ಯೋಜನೆ” ಆಯ್ಕೆಮಾಡಿ.

2:
ಅದಾದ ಬಳಿಕ “Click To Proceed” ಮೇಲೆ ಕ್ಲಿಕ್ ಮಾಡಿ.
ಆಧಾರ್ ನಂಬರ್ ಮತ್ತು ಮೊಬೈಲ್ OTP ಮೂಲಕ ಲಾಗಿನ್ ಆಗಿ.

3:
ಅರ್ಜಿಯ ನಮೂನೆ ತುಂಬಿ, ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ
“Submit” ಬಟನ್ ಒತ್ತಿ ಅರ್ಜಿ ಸಲ್ಲಿಸಬಹುದು.

 ಸಹಾಯಧನ ವಿವರಗಳು (Subsidy Details)

ಜಿಲ್ಲೆಗಳು ಯೋಜನಾ ಮೊತ್ತ ಸಹಾಯಧನ ಸಾಲ
ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ₹3.75 ಲಕ್ಷ ₹3.00 ಲಕ್ಷ ₹75,000 ವಿದ್ಯುತ್ ಗಾಗಿ
ಇತರೆ ಎಲ್ಲಾ ಜಿಲ್ಲೆಗಳು ₹3.75 ಲಕ್ಷ ₹3.25 ಲಕ್ಷ ₹50,000 (4% ಬಡ್ಡಿದರದ ಸಾಲ)

ಅಲ್ಲದೆ, ₹4.75 ಲಕ್ಷ ಘಟಕ ವೆಚ್ಚವಿರುವ ಜಿಲ್ಲೆಗಳಿಗೆ ಪಂಪ್‌ಸೆಟ್, ವಿದ್ಯುತ್ ಸಂಪರ್ಕ ಕೂಡ ಉಚಿತವಾಗಿ ಒದಗಿಸಲಾಗುತ್ತದೆ.

ಇದನ್ನು ಓದಿ : BPL CARD Canceled: ಒಂದೇ ಮನೆಗೆ ಎರಡು ರೇಷನ್ ಕಾರ್ಡ್ ಇದ್ದರೆ ರದ್ದು!

ವಾಸವಿ ಜಲಶಕ್ತಿ ಯೋಜನೆಯಡಿ ಬೋರ್‌ವೆಲ್ ಕೊರೆಸಲು ಆರ್ಥಿಕ ನೆರವಿನೊಂದಿಗೆ, ನೀರಾವರಿ ಮೂಲ ವ್ಯವಸ್ಥೆ ಕಲ್ಪಿಸಲು ಸರ್ಕಾರದಿಂದ ಅತ್ಯಂತ ಉಪಯುಕ್ತ ಯೋಜನೆ ಜಾರಿಗೆ ಬಂದಿದೆ. ಇದು ರೈತರು, ಯುವ ಉದ್ಯಮಿಗಳು ಮತ್ತು ಸ್ವ ಉದ್ಯೋಗ ಆಸಕ್ತರು ಸದುಪಯೋಗಪಡಿಸಿಕೊಳ್ಳಬಹುದಾದ ಅನನ್ಯ ಅವಕಾಶವಾಗಿದೆ.

WhatsApp Group Join Now
Telegram Group Join Now

Leave a Comment

error: Content is protected !!