PM Pasala Bhima Yojana: PM ಫಸಲ ಭೀಮಾ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ! ಈಗಲೇ ಅರ್ಜಿಯನ್ನು ಸಲ್ಲಿಸಿ.
ಕೃಷಿಕರ ಕಷ್ಟ ಕಾಲದಲ್ಲಿ ಬೆಂಬಲವಾಗುವಂತ ನವೀನ ಕ್ರಮವೆಂದರೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY). ಇದೀಗ 2025-26ನೇ ಸಾಲಿನ ಮುಂಗಾರು (ಖರೀಫ್) ಹಂಗಾಮಿಗೆ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕದ ರೈತರು ತಮ್ಮ ಬೆಳೆಗಳನ್ನು ಸಹಜವಾಗಿ ಆಗಬಹುದಾದ ನಷ್ಟಗಳಿಂದ ರಕ್ಷಿಸಿಕೊಳ್ಳಲು ಈ ಯೋಜನೆಯಡಿಯಲ್ಲಿ ವಿಮೆ ಮಾಡಿಸಿಕೊಳ್ಳಬಹುದಾಗಿದೆ.
ಯೋಜನೆಯ ಮುಖ್ಯ ಉದ್ದೇಶಗಳು
- ಪ್ರಕೃತಿ ವಿಕೋಪ, ಧಾರಾಕಾರ ಮಳೆ, ಬರ drought ಅಥವಾ ಗಾಳಿ ಮಳೆಯಂತಹ ಅನಾಹುತಗಳಿಂದ ಬೆಳೆ ಹಾನಿಯಾದರೆ, ರೈತರಿಗೆ ಹಣಕಾಸು ಪರಿಹಾರ.
- ಬೆಳೆಕಳೆದರೂ ಆದಾಯ ಭದ್ರತೆ ನೀಡುವ ಯೋಜನೆ.
- ಕೃಷಿಯಲ್ಲಿ ನಷ್ಟದಿಂದ ಹೊರಬರುವ ದಾರಿ.
2025-26 ನೇ ಸಾಲಿನ ವಿಮೆ ಲಭ್ಯವಿರುವ ಪ್ರಮುಖ ಬೆಳೆಗಳು
ಬೆಳೆ ಹೆಸರು | ಕೊನೆಯ ದಿನಾಂಕ |
ಟೊಮ್ಯಾಟೋ | ಜೂನ್ 30, 2025 |
ಎಳ್ಳು | ಜೂನ್ 30, 2025 |
ಭತ್ತ | ಜುಲೈ 31, 2025 |
ಜೋಳ | ಜುಲೈ 31, 2025 |
ರಾಗಿ | ಜುಲೈ 31, 2025 |
ತೂಗರಿ | ಜುಲೈ 31, 2025 |
ನೆಲಗಡಲೆ | ಜುಲೈ 31, 2025 |
ಹತ್ತಿ | ಜುಲೈ 31, 2025 |
ಈರುಳ್ಳಿ | ಜುಲೈ 31, 2025 |
ಸೂರ್ಯಕಾಂತಿ | ಜುಲೈ 31, 2025 |
ನವಣೆ | ಜುಲೈ 31, 2025 |
ಸಜ್ಜೆ | ಜುಲೈ 31, 2025 |
ಮುಸುಕಿನ ಜೋಳ | ಜುಲೈ 31, 2025 |
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್ (IFSC ಕೋಡ್ ಜೊತೆಗೆ)
- ಜಮೀನಿನ ದಾಖಲೆಗಳು (RTC)
- ಪಾಸ್ಪೋರ್ಟ್ ಸೈಸ್ ಫೋಟೋ
- ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನಗಳು
ರೈತರು ಈ ಕೆಳಗಿನ ಮಾರ್ಗಗಳಲ್ಲಿ ಅರ್ಜಿ ಸಲ್ಲಿಸಬಹುದು:
- Grama One ಅಥವಾ Karnataka One ಕೇಂದ್ರಗಳಿಗೆ ಭೇಟಿ ನೀಡಿ.
- ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು:
👉 https://www.samrakshane.karnataka.gov.in
- ಅಲ್ಲಿ:
- ಸಾಲಿನ ಆಯ್ಕೆ: 2025-26
- ಋತು: Kharif
- ‘Crop You Can Insure’ ವಿಭಾಗದಲ್ಲಿ ನಿಮ್ಮ ಜಿಲ್ಲೆ ಮತ್ತು ಬೆಳೆ ವಿವರ ನೀಡಿ.
ಪ್ರತಿಯೊಬ್ಬ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಬೇಕು. ಕಾರ್ಮಿಕ ಶ್ರಮ, ಬಿತ್ತನೆ ವೆಚ್ಚ, ಪಂಪ್ಸೆಟ್ ವಿದ್ಯುತ್—all investment ಅನ್ನು ನಷ್ಟದ ಸ್ಥಿತಿಯಿಂದ ರಕ್ಷಿಸಲು ಈ ಯೋಜನೆ ಅತ್ಯಂತ ಅಗತ್ಯವಾಗಿದೆ.
ಹೆಚ್ಚಿನ ಮಾಹಿತಿಗೆ ಅಥವಾ ಸಹಾಯಕ್ಕೆ ಸಂಪರ್ಕಿಸಿ : ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ